1. ಭಾವನಾಭಿನಯ 


ನಾಯಿಯ ಭಾವನಾಭಿನಯದ ಶಕ್ತಿಯದು 
ಬಾಯಿಗಿಂತ ಬಾಲಕ್ಕೆ ಅತಿ ಹೆಚ್ಚು, 
ಪರರ ಓಲೈಸುವ ವಂಚಿತ ಕಲೆಯದು 
ನಿಷ್ಠನ ಕಪಾಳಕ್ಕೆ ಬಾರಿಸಿದ ಪೆಟ್ಟು !
                             
                 -ಎಮ್ಮೆಚ್ಚೆ 

ವಿಸ್ತೃತ 
ನಾಯಿಯು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಬಾಯಿಗಿಂತ ತನ್ನ ಬಾಲವನ್ನು  ಹೆಚ್ಚು ಉಪಯೋಗಿಸುತ್ತದೆ. ನಾವು ಅದರ ಬಾಯಿಯಿಂದ ಅದರ ಭಾವನೆ ತಿಳಿಯಲು ಪ್ರಯತ್ನಿಸುತ್ತೇವೆ ಹೊರತು ಬಾಲವನ್ನು ಗಮನಿಸುವುದಿಲ್ಲ. ಅದರಂತೆ ಬೇರೆಯವರ ಮನಸ್ಸನ್ನು ಸೆಳೆವ ಕಲೆ ಮೋಸಗಾರನಿಗೆ ಹೆಚ್ಚಾಗಿರುವುದರಿಂದ ವಂಚನೆಗೆ ಒಳಗಾಗುತ್ತೇವೆ ಹಾಗೂ ಪ್ರಾಮಾಣಿಕನನ್ನು  ದೂರವಿಡುತ್ತೇವೆ. ಇದರಿಂದ ಪ್ರಾಮಾಣಿಕ ವ್ಯಕ್ತಿಗಳಿಗೆ ಹಾಗೂ ಸಮಾಜಕ್ಕೆ ಹಿಂಜರಿತ ಉಂಟಾಗುತ್ತದೆ. 


2. ಶೂನ್ಯ ಸಂಪಾದನೆ 



ಕೊಟ್ಟು ಬಿಟ್ಟು ಬಚ್ಚಿಟ್ಟ ಒಯ್ಯಲಾರದ ವಸ್ತು
ಸಂಗ್ರಹಣೆಯ ಹುಸಿ ಭ್ರಮೆಯ ಭರವಸೆಗಸ್ತು 
ಬಾಳಬೇಕಾದವರ ಬರಸೆಳೆದ ನೆಪತ್ತು 
ಹೋದರಲ್ಲ ಮತ್ಸರದ ಮಿತ್ರರು ಒಯ್ಯದೇ ಸ್ವತ್ತು !

                                              -ಎಮ್ಮೆಚ್ಚೆ 

ವಿಸ್ತೃತ 

ಮರಣಿಸಿದಮೇಲೆ ಯಾರೂ ಏನನ್ನೂ ಜೊತೆಗೆ ಒಯ್ಯಲು ಸಾಧ್ಯವಿಲ್ಲವಾದರೂ ಎಲ್ಲರೊಂದಿಗೆ ಹಂಚಿ ಖುಷಿಪಡದೆ ಬಚ್ಚಿಟ್ಟುಕೊಳ್ಳುತ್ತೇವೆ. ಜೀವನದಲ್ಲಿ ನೆಮ್ಮದಿಯಾಗಿ ಬದುಕಲು ಸಂಪಾದಿತ ಸಂಗ್ರಹಣೆ ಬಲುಮುಖ್ಯ, ಆದರೆ ಅವಶ್ಯಕತೆಗೂ ಮೀರಿ ಆಸೆಪಡುತ್ತೇವೆ. ಸಂಭಂದಗಳಲ್ಲೇ ಮೋಸ ಮಾಡಿದಂತಹ ಕೆಲ ಗೆಳೆಯರು  ಏನೂ ಒಯ್ಯದೆ ಗತಿಸಿಹೋಗಿರುವುದು ವಿಪರ್ಯಾಸ. 

Comments

Post a Comment

Liked the post? Don't forget to tell us, do comment.

Popular Posts