1.

ಶಾಂತವಿದ್ದ ಮನದಲಿ ಬಂದು ನೀ ಮಾಡಿದೆ ಸದ್ದು

ಇದರ ಪ್ರತಿಧ್ವನಿಯಿಂದಾಗಿದೆ ನನಗೆ ನಿದಿರೆಯೇ ರದ್ದು

ಎಲ್ಲಿ ಮಾಯವಾದೆ ನನ್ನ ಮನವನು ಕ್ಷಣದಲಿ ಕದ್ದು

ನಿನಮೇಲಿನ ಹುಚ್ಚು ಇಂದು ಮೀರಿದೆ ಎಲ್ಲಾ ಹದ್ದು

ಬಿಗಿದಪ್ಪಿ ಕೂಡಲೆನಿಸಿದೆ ನಿನಗೆ ಸಾವಿರ ಮುದ್ದು

ನನಗಿರುವ  ರೋಗಕೆ ನೀನಲ್ಲದೆ ಬೇರಾವ ಮದ್ದು!

                                                                     - ಮನುಜ


2.


ಸರಿಯಾದ ತಪ್ಪನೇ ಬೆಪ್ಪು ಮನವು ಮಾಡಿದೆ.
ದೂರದಾರಿ ಕ್ರಮಿಸಿ ಇಂದು ಮನವು ಕೊಂಚ ಅಳುಕಿದೆ.

ತಂದೆ ತಾಯಿ ಎನ್ನಲಿಲ್ಲ, ಪರಿಣಾಮ ಅಳೆಯಲಿಲ್ಲ.
ಅಣ್ಣ ಕಟ್ಟಿಕೊಟ್ಟ ಕನಸ ನನಸ ಮಾಡ ಹೊರಟೆನಲ್ಲ.

ಪದವಿಯಿಂದ ಸಂದ ಕೆಲಸ ನಾನೇ ದೂರ ತಳ್ಳಿದೆ.
ದೇಶ ಕೊಡುವ ದೊಡ್ಡ ಹುದ್ದೆ ಬಯಸಿ ಅಂತೆ ಸಾಗಿದೆ.

ದೇಶಸೇವೆ, ದೇಶಹಿರಿಮೆ ನನ್ನ ಕಟ್ಟುಪಾಡು.
ಅತ್ಮಗೌರವ, ವ್ಯಕ್ತಿತ್ವ ನನ್ನ ಮುಖ್ಯ ಹಾಡು.

ಆದರೆ,
ಅಂದುಕೊಂಡಂಗಿಲ್ಲ ಅಪ್ಪ-ಅಮ್ಮರ ಆರೋಗ್ಯ.
ಅವರ ಮಾತು‌ ಮೀರಿ ಬಂದ ನಾನೊಬ್ಬ ಅಯೋಗ್ಯ.

ಹಿಂದಿನಿಂದ ಬಂದು ಜವಾಬ್ದಾರಿ ತಲೆಯ ತಟ್ಟಿದೆ.
ಸ್ವಾವಲಂಬಿಯಾಗಲಿಂದು ಮನವು ಒದ್ದಾಡಿದೆ.

ಶಕ್ತಿ ತುಂಬುವ ಅಣ್ಣ-ಪ್ರೀತಿ ಹಂಚುವ ಅಕ್ಕ,
ಟೀಕೆ-ಟಿಪ್ಪಣಿ ಮಾಡಿದವರೇ ನನಗೆ ಸ್ಪೂರ್ತಿ.

ಜೀವನಸಾಗರದಲಿ ಅಲೆಗಳ ಏರಿಳಿತ,
ಈಜಿ ದಡ ಸೇರಿಸು ನೀ ಆತ್ಮನಾವಿಕ.

ಆಗುವುದೆಲ್ಲ ಒಳ್ಳೆಯದಕೆ, ನೀ ತಾಳ್ಮೆ ತಂದುಕೋ.
ಮರಳಿ ಬರದ ಸಮಯವನ್ನು ತಿಳಿದು  ಬಳಸಿಕೋ.           
                                                          -ವಿ.ಬಿ.ಜಿ.

3.

ನನ್ನ ಕವಿತೆ, ಕವಿ ಎಂಬ ಪಟ್ಟಕ್ಕಲ್ಲ
ನಾ ಹಾಡಿದೆ, ಗಾಯಕನಾಗುವ ಆಸೆಗಲ್ಲ
ನಾ ಬಿಡಿಸಿದೆ, ಚಿತ್ರಗಾರನಾಗಿ ಮೆರೆಯಲಲ್ಲ
ನನ್ನ ಕಲೆಗಳಾವೂ ಕಲಾವಿದನೆಂಬ ರುಜವಿಗಲ್ಲ
ಅವು ನಿನಗಾಗಿ, ನಿನ್ನೊಲವಿಗಾಗಿ
                                              - ಮನುಜ

Comments

Popular Posts