1.
ಕೂಡಲಾರದೆ ಕೂಡಿದ ಮಾಧವೇಶ
ಮಾಡಿದ್ದು ಗೋಪಿಜನ ಪರೀವೇಶ,
ಸನ್ಯಾಸಿ ಅರ್ಜುನನ ಸಮಾವೇಶ
ಅದು ಮಾದವಗೇ ನೀಡಿದ ಕ್ರಮಾದೇಶ!
ಎಮ್ಮೆಚ್ಚೆ
ವಿಸ್ತೃತ
ಒಂದು ಹೆಂಡತಿಯನ್ನೇ ಸರಿಯಾಗಿ ಸಾಕಲು ಪಡಲಾರದ ಪರಿಪಾಟಲು ಪಡುತ್ತಿರುವ ಸಾಮಾನ್ಯ ಜನರಿಗೆ, ಧರ್ಮ ಗ್ರಂಥಗಳ ಪ್ರಕಾರ ಹದಿನಾರು ಸಾವಿರಕ್ಕೂ ಮಿಕ್ಕಿ ಮಹಿಳೆಯರನ್ನು ವಿವಾಹವಾಗಿ ದೇವರಾದ ಶ್ರೀ ಕ್ರೃಷ್ಣ ಪರಮಾತ್ಮನು ಹೇಗೆ ಮಾಡಿರಬಹುದು ಎನ್ನುವ ಜಿಜ್ಞಾಸೆ ಕಾಡದಿರದು. ಈ ವಿಚಾರವಾಗಿ ಒಬ್ಬೊಬ್ಬರ ವಿಚಾರಗಳು ಒಂದೊಂದು ತರಹವಾಗಿವೆ. ಪಂಡಿತರುಗಳ ವಿಚಾರಗಳಂತೆ ಶ್ರೀ ಕ್ರೃಷ್ಣನೊಬ್ಬ ಮಾಯಾವಿ ದೇವನು. ಧರ್ಮ ಸಂಸ್ಥಾಪನೆಗಾಗಿ ಅವನಿಂದ ಎಲ್ಲವೂ ಸಾಧ್ಯ.
ಹಿಂದೆ ಯಾದವೀ ಕಲಹದಲ್ಲಿ ಶ್ರೀ ಕ್ರೃಷ್ಣನು ನರಕಾಸುರನನ್ನು ಸಂಹಾರಮಾಡಿದ ನಂತರ ವಿಧವೆಯರಾದ ಹದಿನಾರು ಸಾವಿರ ಅನಾಶ್ರಿತ ನೊಂದ ಗೋಪಿಕಾ ಮಹಿಳೆಯರನ್ನು ವಿವಾಹವಾಗಿ ಸೌಭಾಗ್ಯವನ್ನು ಕರುನಿಸುತ್ತಾನೆ. ನಂತರ, ಮೊದಲೇ ಮೌನ ವಿಧ್ಯೆಯನ್ನು ಕರಗತ ಮಾಡಿಕೊಂಡಿರುವ ಗೋಪಿಕಾ ಹೆಂಡತಿಯರೆಲ್ಲರನ್ನೂ ಪರೀವೇಶಕ್ಕೆ ಒಳಪಡಿಸಿ ಮುಕ್ತಿ ಕರುಣಿಸುತ್ತಾನಂತೆ.
ಆದರೆ ಶ್ರೀ ಕ್ರೃಷ್ಣನ ತಂಗಿಯ ಗಂಡ ಅರ್ಜುನನು ಹೆಣ್ಣಿನ ಪರಿತ್ಯಾಗಿಯಂತೆ ಸನ್ಯಾಸಿ ವೇಷವನ್ನು ಧರಿಸಿಯೂ ಚಪಲತನದಿಂದ ಮಾವನ ಹಾಗೆಯೇ ಸಾಕಷ್ಟು ಜನ ಮಹಿಳೆಯರ ಸಂಪರ್ಕ ಹೊಂದಿರುತ್ತಾನೆ. ಶ್ರೀಕ್ರೃಷ್ಣನಾದರೆ ದೇವನು, ಧರ್ಮ ಸಂಸ್ಥಾಪನೆಗೆ ಮಾಡಿದ್ದಾನೆನ್ನಬಹುದು ಆದರೆ ಅರ್ಜುನ ಈ ರೀತಿಮಾಡಿದುದು ಸರಿಯೆ? ಈ ವಿಷಯ ಕ್ರೃಷ್ಣನಿಗೆ ತಿಳಿದಿದ್ದರೂ ಸಹ ಸುಮ್ಮನಿದ್ದನೆಂದರೆ ಅರ್ಜುನಿಗೆ ಅವನ ಉತ್ತೇಜನ ಇರಬಹುದೊ ಅಥವಾ ನೈತಿಕ ಧರ್ಮ ಇರದವರು ಉಪದೇಶ ಮಾಡಬಾರದೆಂಬ ತತ್ವದಿಂದ ಕ್ರೃಷ್ಣನ ಮೇಲೆ ಹೊರಡಿಸಿದ ಕ್ರಮಾದೇಶವೋ ಏನೋ?
Comments
Post a Comment
Liked the post? Don't forget to tell us, do comment.